Interview
ಹಳ್ಳಿಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವುದೇ ನನಗೆ ಹೆಚ್ಚು ಇಷ್ಟ – ಭಾಮಾ
by admin on Dec.08, 2011, under Interview

ಡರ್ಟಿ ಪಿಕ್ಚರ್ ನಿಂದ ಮಲೆಯಾಳಿ ಚೆಲುವೆ ವಿದ್ಯಾ ಬಾಲನ್ ಕೌಟುಂಬಿಕ ಪ್ರೇಕ್ಷಕರಿಂದ ಉಗಿಸಿ ಕೊಳ್ಳುತ್ತಿದ್ದರೆ, ಅಲ್ಲಿಂದಲೇ ಕನ್ನಡಕ್ಕೆ ಬಂದ ‘ಶೈಲೂ’ಸಿನಿಮಾದ ಚೆಲುವೆ ಭಾಮಾ ಮಾತಿನಿಂದಲೇ ಬೇಷ್ ಎನಿಸಿಕೊಳ್ಳುತ್ತಿದ್ದಾಳೆ. ಕನ್ನಡಕ್ಕೆ ಮೊದಲ ಸಲ ಸಿನಿಮಾ ಮೂಲಕ ಪರಿಚಯವಾಗಿ ಈಗ ಶೈಲೂವಿನ ಪಾತ್ರದ ಮೂಲಕ ಗಟ್ಟಿನೆಲೆಯಾಗುವ ಲಕ್ಷಣಗಳು ಕಂಡುಬರುತ್ತಿವೆ. ಹೆಚ್ಚು ಹೆಚ್ಚು ಹಳ್ಳಿ ಗೆಟಪ್ನಲ್ಲಿಯೇ ಸಿನಿಮಾದಲ್ಲಿ ಕಾಣಿಸಿಕೊಂಡರು, ತನ್ನ ಪ್ರತಿಭೆಯಿಂದಲೆ ಮೇಲೆ ಬರುತ್ತೇನೆ ಎನ್ನುವ ವಿಶ್ವಾಸ ಈ ಹುಡುಗಿಯದು. ಮೊನ್ನೆ ಶೈಲೂ ಪ್ರಮೋಷನ್ಗೆ ಬಂದಾಗ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ…
ಪ್ರಶ್ನೆ: ನೀವು [...]
ಲೈಫಿನಲ್ಲಿ ಗೆದ್ದೋರು ಈಗ ಹ್ಯಾಪಿ
by admin on Sep.22, 2011, under Interview, News

ಯಾವುದೇ ನಿರ್ದೇಶಕನಾಗಲೀ ತನ್ನ ಮೊದಲ ಚಿತ್ರ ಗೆಲ್ಲಿಸಿಕೊಂಡರೆ ಆತ ಗಾಂಧಿನಗರದಲ್ಲಿ ಕಾಲೂರಿದ ಅಂತಲೇ ಅರ್ಥ! ವರ್ಷದ ಹಿಂದಷ್ಟೇ ನಿರ್ದೇಶಕ ಯೋಗರಾಜ್ ಭಟ್ ಬಳಿ ಸಹಾಯಕರಾಗಿ ದುಡಿಯುತ್ತಿದ್ದ ಪವನ್, ಪತ್ರಿಕಾಗೋಷ್ಠಿಗಳಲ್ಲಿ ಅವರ ಹಿಂದಿನ ಸಾಲಿನಲ್ಲಿ ನಿಲ್ಲುತ್ತಿದ್ದರಂತೆ. `ಈಗ ನನ್ನ ಹಿಂದೆ ನೂರಾರು ಕನಸು ಹೊತ್ತಿರುವ ಸಹಾಯಕ ನಿರ್ದೇಶಕರಿದ್ದಾರೆ. ಅವರೂ ಮುಂದಿನ ವರ್ಷಗಳಲ್ಲಿ ಆಕ್ಷನ್ – ಕಟ್ ಹೇಳಬಹುದು… ಅವರಿಗೂ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ…’ ಎಂದು ಕೇಳಿಕೊಂಡರು ನಿರ್ದೇಶಕ ಪವನ್. ಕಳೆದ ಎರಡು ವಾರದ ಹಿಂದೆ ಬಿಡುಗಡೆಯಾಗಿದ್ದ [...]
ಪವರ್ಪುಲ್ "ಭದ್ರ’ ಉತ್ತರ ಕರ್ನಾಟಕದವರಿಗೆ ಇಷ್ಟವಾಗುತ್ತಾನಂತೆ
by admin on Aug.14, 2011, under Interview, News

ಕನ್ನಡ ಚಿತ್ರಗಳು ಎಷ್ಟೇ ರಭಸವಾಗಿ ಬೆಂಗಳೂರಿನಲ್ಲಿ ಬಿಡುಗಡೆಯಾದರು, ಗೆಲುವಿನ ದಡ ಸೇರಬೇಕಾದರೆ ಉತ್ತರ ಕರ್ನಾಟಕದ ಮಾರ್ಕೆಟ್ ಬಹು ಮುಖ್ಯ. ಸಿನಿಮಾ ನಿರ್ದೇಶಕನಾದವನು ಸಮಸ್ತ ಕನ್ನಡ ಚಿತ್ರ ರಸಿಕರನ್ನು ಗಮನದಲ್ಲಿಟ್ಟುಕೊಂಡೆ ಸಿನಿಮಾ ನಿರ್ಮಿಸಬೇಕು. ‘ಭದ್ರ’ ಕೂಡ ತುಂಬ ಆಕ್ಷನ್ ಮೂವಿ. ಪ್ರಜ್ವಲ್ ತನ್ನ ಅಭಿಮನಿಗಳ ಮನತಣಿಸುವಲ್ಲಿ ಬೇಕಾದ ಪೈಟ್ಸ್,ಕಾಮೆಡಿ ಹಾಗೂ ಇಂಪಾದ ಹಾಡುಗಳೊಂದಿಗೆ ಚಿತ್ರ ನಿರ್ದೇಶಿಸಿದ್ದೇನೆ, ಎನ್ನುತ್ತಾರೆ ಮಹೇಶ್ ರಾವ್.
ಮಹೇಶ್ ರಾವ್ ‘ಭದ್ರ’ ಮೂರನೇ ಚಿತ್ರ. ಮೊದಲ ಸಿನಿಮಾ ಧಿಮಾಕಿನ ನಂತರ ಪ್ರಲ್ವಲ್ನೊಂದಿಗೆ ‘ಮುರುಳಿ ಮೀಟ್ಸ್ ಮೀರಾ’ [...]
ಆರ್.ಚಂದ್ರುರವರ ಸಿನಿಮಾ(ಕೋ..ಕೋ..) ಹುಟ್ಟುವ ಸ್ಥಳ
by admin on May.26, 2011, under Interview, Special Feature

ಕಳೆದ ಒಂದೆರಡು ತಿಂಗಳಿನಿಂದ ಆರ್.ಚಂದ್ರುರವರ ಸಂದರ್ಶನಕ್ಕಾಗಿ ಹತ್ತಾರು ಭಾರಿ ಪೋನಾಯಿಸುತ್ತಿದ್ದೆ. ಆ ಪೋನು ರಿಂಗಾಗುತಿತ್ತೆ ವಿನಃ ಉತ್ತರ ಬರುತ್ತಿರಲಿಲ್ಲ. ನಾನು ಆರ್.ಚಂದ್ರು ಇದ್ದವರು ಈಗ ಬಿ(ಬ್ಯುಸಿ) ಚಂದ್ರು ಆಗಿದ್ದಾರೆ ಎಂದು ಸುಮ್ಮನಾಗಿದ್ದೆ. ಇತ್ತೀಚೆಗೆ ಕೊ..ಕೊ..ಮ್ಯೂಸಿಕ್ ಮುಹೂರ್ತದಲ್ಲಿ ಚಂದ್ರುರವರ ಸಿಕ್ಕಾಗ ಸಂದರ್ಶನಕ್ಕೆ ಸಮಯ ಕೇಳಿದ್ದೆ. ಅವರ ಕಛೇರಿ ಬೆಂಗಳೂರಿನ ಶಂಕರ ಮಠ ರಸ್ತೆ ಸಮೀಪವಿದೆ. ತಾಜ್ ಮಹಲ್ ಸಿನಿಮಾದಿಂದಲೂ ಅವರ ಸಿನಿಮಾ ಚಟುವಟಿಕೆ ತಾಣವನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ.
ಅವರೊಂದಿಗೆ ಒಂದು ದಿನ ಮುಂಜಾನೆ ಕುಳಿತು ಮಾತನಾಡುವಾಗ ತಲೆಯಲ್ಲಿ ಎನೇನೋ ಯೋಚನೆಗಳು [...]
ಭಟ್ಟರೊಂದಿಗೆ ಹರಟೆ
by admin on Sep.24, 2010, under Interview

ಯೋಗರಾಜ್ ಭಟ್ಟರು ಹರಟೆಗೆ ವೇರಿ ಪೇಮಸ್ಸು ಎಂಬುದಕ್ಕೆ ಅವರ ಸಿನಿಮಾಗಳೆ ಸಾಕ್ಷಿ. ಮುಂಗಾರು ಮಳೆಗಿಂತ ಮುನ್ನ ಮಣಿ ಸಿನಿಮಾ ನಿರ್ದೇಶಿಸಿದರು. ಆದರೆ ಅವರ ಅಭಿಮಾನಿಗಳು ಹುಟ್ಟಿದ್ದೆ ಮಳೆಯ ನಂತರ. ಹಾಗೇ ಪಂಚರಂಗಿ ಕೂಡ ಇಂದು ಅಭಿಮಾನಿಗಳಿಂದ ಸಿನಿಮಾ ಹಿಟ್ ಲಿಸ್ಟ್ ಗೆ ಸೇರುವ ಹಂತದಲ್ಲಿದೆ. ಈ ಸಮಯದಲ್ಲಿ ಯೋಗರಾಜ್ ಭಟ್ ಮೊನ್ನೆ ಕೆ.ಕಲ್ಯಾಣ್ ರವರ ‘ರಿಯಲ್ ಟೈಮ್ ಪಾಸ್" ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಒಂದಿಷ್ಟು ಹರಟೆಗೆ ಸಿಕ್ಕಿದರು.
ಭಟ್ಟರು ಸಮ್ಮಸುಮ್ಮನೆ ಮಾತನಾಡುವವರಲ್ಲ. ಒಮ್ಮೆ ನಾಗತಿಹಳ್ಳಿಯ ಚಿತ್ರಕಥಾ ಶಿಬಿರದಲ್ಲಿ [...]
ಚಾಲೆ೦ಜಿ೦ಗ್ ಸ್ಟಾರ್ ದರ್ಶನ್ ಜೊತೆ ಮಾತುಕತೆ
by admin on Sep.03, 2010, under Interview

ದರ್ಶನ್ ಸಿನಿಮಾ ಲೋಕಕ್ಕೆ ಮೊದಲು ಹೆಜ್ಜೆಯಿಟ್ಟಾಗ ಅವರ ನಾಮಬಲಕ್ಕೆ ತೂಗುದೀಪ್ ಎಂದಿತ್ತು. ತೂಗುದೀಪ್ ಶ್ರೀನಿವಾಸ್ ರ ಬ್ರಾಂಡ್ ದರ್ಶನ್ ನಿಗೆ ಸಹಾಯಕವಾಗಿತ್ತು. ಆದರೆ ಇಂದು ದರ್ಶನ್ ನನ್ನು ಚಾಲೆಂಜಿಂಗ್ ಸ್ಟಾರ್ ಎಂದೇ ಸಂಬೋದಿಸಲಾಗುತ್ತದೆ. ಈ ಪದಕ್ಕೆ ಅವರ ಪ್ರತಿಭೆ ಮತ್ತು ಮಾಧ್ಯಮದವರೊಂದಿಗೆ ಅವರ ಹಟ ಎರಡು ಸೇರಿದೆ. ಇಂದು ನಿರ್ಮಪಕರಿಗೆ ಅವರ ಕಾಲ್ಷೀಟ್ ಪಡೆಯುವುದು ಚಾಲೆಂಜಿಂಗ್ ವಿಷಯವೇ. ಶೌರ್ಯ ಬಿಡುಗಡೆಯಾಗಿ ಸಾಮಾನ್ಯ ರಿಸಲ್ಟ್ ಪಡೆದರೂ, ಇನ್ನೂ ಮೂರ್ನಾಲ್ಕು ಸಿನಿಮಾಗಳು ಹೆಸರು ಮಾಡುತ್ತಿವೆ. ಅವುಗಳಲ್ಲಿ ‘ಸಾರಥಿ’, ಪ್ರಿನ್ಸ್ ಮತ್ತು [...]
ಸೌಂದರ್ಯ ಜಗದೀಶ್ರವರ ಸಿನಿಮಾ ಕ್ರೇಜ್
by admin on Aug.22, 2010, under Interview, News

ಬೆಂಗಳೂರಿನ ಯಾವುದೇ ಮೂಲೆಯಲ್ಲಿ ಹೋದರು ನಿಮಗೆ ಸೌಂದರ್ಯ ಕನ್ಸ್ಟ್ರಕ್ಷನ್ ಹೆಸರು ಕಾಣಬಹುದು. ಅವರ ಕೆಲಸದಲ್ಲಿನ ವೃತ್ತಿಪರತೆ ಅವರನ್ನು ಆ ಮಟ್ಟಕ್ಕೆ ಕೊಂಡೊಯ್ದಿದೆ. ಈಗ ಸೌಂದರ್ಯ ಜಗದೀಶ್ ಹೆಸರು ಮಾಡುತ್ತಿರುವುದು ಚಿತ್ರರಂಗದಲ್ಲಿ. ಮೊದಲು ಮಸ್ತ ಮಜಾ ಮಾಡಿ ಸಿನಿಮಾದಿಂದಲೇ ಗೆಲುವಿನ ರಥವನ್ನೇರಿ, ಈಗ ತಮ್ಮ ಮಗ ಮಾ.ಸ್ನೇಹಿತ್ ನನ್ನೆ ಬೆಳ್ಳಿತೆರೆಯಲ್ಲಿ ಪರಿಚಯಿಸುತ್ತಿರುವುದು ನಮಗೆ ತಿಳಿದಿದೆ. ಆದರೆ ಸೌಂದರ್ಯ ಪಿಲಂಸ್ ನ ಮುಂದಿನ ವಿಷನ್ ಎನೆಂದು ಕೇಳಿದರೆ ಜಗದೀಶ್ ಹೇಳುವುದು ಹೀಗೆ,,
"ನನಗೆ ಸಿನಿಮಾ ಒಂದು ಪ್ಯಾಷನ್. ನನ್ನ ವೃತ್ತಿ [...]
ಸೊಲ್ಲ… ಸೊಲ್ಲ…. ಮುರುಳಿ ಅಬ್ಬಾಸ್
by admin on Mar.13, 2010, under Interview

"ಸೊಲ್ಲ ಸೊಲ್ಲ ಇನಿಕ್ಯುಂ" (ಹೇಳು ಹೇಳು ಸಿಹಿಮಾತನ್ನು) ಹೇಳಲು ನಿದೇ೯ಶಕ ಮುರುಳಿ ಅಬ್ಬಾಸ್ ಕನಾ೯ಟಕಕ್ಕೆ ತಮ್ಮ ಸಿನಿಮಾವನ್ನು ತಂದಿದ್ದಾರೆ.
ಆರ್ಯ-2 ಖ್ಯಾತಿಯ ನವದೀಪ್ ಹಾಗೂ ಮಧುಮಿತಾ ಹಾಗೂ ಕನ್ನಡಿಗ ಪ್ರಕಾಶ್ ರಾಜ್ ನಟಿಸಿರುವ ಈ ಚಿತ್ರದ ಮೂಲಕ ಹದಿಹರೆಯದವರಿಗೆ ಪ್ರೇಮದ ಪಾಠ ನಡೆಯುತ್ತಿದೆ. "ಸೊಸೊಇ" ಮುರುಳಿಯವರ ಎರಡನೆಯ ಚಿತ್ರ. ಹತ್ತು ವಷ೯ಗಳ ಹಿಂದೆ "ರಾಶಿ" ನಿದೇ೯ಸಿದ ಈ ಚಿತ್ರ ಅಜೀತ್ ಗೆ ಮೊದಲ ಆಕ್ಷನ್ ಚಿತ್ರವಾಗಿದ್ದು ಪ್ರಕಾಶ್ ರಾಜ್ ಮೊದಲಬಾರಿಗೆ ತಮಿಳು ಸಿನಿಮಾದಲ್ಲಿ ವಿಲನ್ ಪಾತ್ರ [...]
ಯಾರನ್ನು "ಸ್ವಯಂವರಿ"ಸುವಳು ಈ ಚೆಲುವೆ?
by admin on Mar.13, 2010, under Interview

ಲವ್ ಮಾಡಿದ್ರೂ ಓಡಿ ಹೋಗಿ ಮದುವೆ ಆಗಬಾರದು. ತಂದೆ-ತಾಯಂದಿರನ್ನ ಒಪ್ಪಿಸಿಯೇ ಮದುವೆ ಆಗಬೇಕು ಅಂತಾ ಹಟಾ ತೊಟ್ಟು ಅದರಂತೆ ಪ್ರೀತಿಯಲ್ಲಿ ಎಲ್ಲರ ಮನಸ್ಸನ್ನ ಗೆದ್ದು, ಕಡೆಗೂ ಒಂದಾಗ್ತಾರೆ ಸಜನಿ (ಶರ್ಮಿಳಾ ಮಾಂಡ್ರೆ) ಮತ್ತು ಧ್ಯಾನ್. ಅಂದು "ಸಜನಿ"ಯಲ್ಲಿ ಹಾಗೆ ಒಂದಾಗಿದ್ದ ಸಜನಿ ಇಂದು "ಸ್ವಯಂವರ"ದಲ್ಲಿ ಯಾವ ರೀತಿ ಹುಡುಗರ ಮನಸ್ಸನ್ನ ಗೆಲ್ಲತಾಳೆ, ಯಾವ ಹುಡುಗನ ಜೊತೆ "ಸ್ವಯಂವರ"ಕ್ಕೆ ನಿಲ್ಲತಾಳೆ ಎನ್ನುವುದನ್ನ ಪ್ರೇಕ್ಷಕರು ಕಾದು ನೋಡಬೇಕಷ್ಟೆ.
ನನಗೆ ನಾನು ಮಾಡಿದ ಚಿತ್ರಗಳಲ್ಲಿ ಆತ್ಮತೃಪ್ತಿ ಇದೆ. ನಾನು ಚಿತ್ರಗಳ [...]
"ಯಕ್ಕಾ" ಬಿದ್ದರೆ ಸೋಲು ಇಲ್ಲ
by admin on Mar.12, 2010, under Interview

ನನಗೆ ಇಸ್ಪೀಟ್ ಆಡಲಿಕ್ಕೆ ಬರುವುದಿಲ್ಲ. ಆದರೂ ನನ್ನ ಸ್ನೇಹಿತರಿಂದ "ಯಕ್ಕಾ" ಎಂದರೆ ಏನು ಎಂದು ತಿಳಿದುಕೊಂಡು "ಎಕ್ಕಾ" ಎಂಬ ಟೈಟಲ್ ಕೊಟ್ಟು ಸಿನಿಮಾ ಮಾಡಿದ್ದೇನೆ. "ಯಕ್ಕಾ" ಎಂದರೆ ಇಸ್ಪೀಟ್ ಆಟ. ಇಸ್ಪೀಟ್ ಆಟದಲ್ಲಿ ಏಸ್ ಅಂದರೆ ಎ ಬಂದರೆ ಸೋಲು ಇಲ್ಲ ಎಂದರ್ಥ. ಇದು ನನ್ನ ಎರಡನೇ ಚಿತ್ರ. ಮೊದಲ ಚಿತ್ರ "ಜಾಲ" ಎನ್ನುತ್ತಾರೆ "ಯಕ್ಕಾ" ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ನಾಗನಾಥ ಜೋಶಿ ಅವರು.
"ಯಕ್ಕಾ" ಚಿತ್ರದ ಕಾನ್ಸೆಪ್ಟ್ ನ್ನು ಮೂರು ರೀತಿಯಲ್ಲಿ ಹೇಳಲಿಕ್ಕೆ [...]

