Chitra Vaarte

Interview

ಸಾಧನೆಯ ಬೆನ್ನೇರಿ ಮಾ| ಚಿರಂಜಿವಿ

by on Mar.09, 2010, under Interview

MasterChiranjeevi

"ಕ್ಷಣ ಕ್ಷಣ", ಮತ್ತು "ಪಲ್ಲಕ್ಕಿ"ಯಲ್ಲಿ ನಾಲ್ಕು ವರ್ಷದವನಿರುವಾಗಲೇ ನಟಿಸಿದ್ದಾನೆ. "ಮಾತಾಡ್ ಮಾತಾಡು ಮಲ್ಲಿಗೆ" ರಾಜ್ ಕುಮಾರಿ, ಹೂವು, ಸುಗ್ರೀವ, ದೇವರು ಕೊಟ್ಟ ತಂಗಿ, ಸದ್ಯ ಪುನೀತ್ ಅವರ ಪೃಥ್ವಿ, ಯೋಗಿ ಅವರ ರಾವಣ, ಯೋಗಿ, ಪುಂಡ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾನೆ. ಕೇವಲ ಚಿತ್ರಗಳಲ್ಲಿ ಅಷ್ಟೆ ಅಲ್ಲದೇ ಗುಪ್ತಗಾಮಿನಿ,ಪಾರ್ವತಿ ಪರಮೇಶ್ವರ ಇಂಥ ಅನೇಕ ಧಾರಾವಾಹಿಗಳಲ್ಲೂ ನಟಿಸಿದ್ದಾನೆ. ನಟಿಸುತ್ತಿದ್ದಾನೆ ಕೂಡ.
 
ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ದೊಡ್ಡ ಸಾಧನೆ ಎಂದರೆ ಯಾರಾದರೂ ನಂಬೋಕೆ ಸಾಧ್ಯಾನಾ. [...]

Leave a Comment more...

ನಾರದ ವಿಜಯ ಸಂತೋಷ್

by on Mar.09, 2010, under Interview

"ಬಂದೇ ಬರ್ತಾಳೆ" ಅನ್ಕೊಂಡು ಸಿದ್ದನಿಂದ ಇವಾಗಾ "ನಾರದ ವಿಜಯ"ನ ಕಡೆ ಬಂದಿದಾರೆ ಸಂತೋಷ್ ಸೂರ್ಯ. "ಬಂದೇ ಬರ್ತಾಳೆ" ಚಿತ್ರ ಚೆನ್ನಾಗಿ ಮೂಡಿ ಬಂದಿತ್ತು. ಆದರೆ ಈ ಚಿತ್ರಕ್ಕೆ ಹೆಚ್ಚು ಪಬ್ಲಿಸಿಟಿ ಸಿಗದ ಕಾರಣ ಚಿತ್ರ ಹೆಚ್ಚು ದಿನಗಳ ಕಾಲ ನಡೆಯಲಿಲ್ಲ ಎನ್ನುತ್ತಾರೆ ನಾರದ ವಿಜಯ.
 
"ಬಂದೇ ಬರ್ತಾಳೆ" ಚಿತ್ರ ೨೦೦೯ ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ ನಟಿ ಅಂಬಾರಿ ಖ್ಯಾತಿಯ ಸುಪ್ರಿತಾ. ಈ ಚಿತ್ರದ ನಂತರ ತಯಾರಾಗಿರುವುದು "ಸಿದ್ದ". ಆದರೆ "ಸಿದ್ದ"ನಿಗಿಂತ ಮೊದಲು "ನಾರದ ವಿಜಯ" ಈಗ [...]

Leave a Comment more...

ಎಪ್ರೀಲ್ ನಲ್ಲಿ ಕೃಷ್ಣ ಬರುತ್ತಿದ್ದಾನೆ

by on Mar.03, 2010, under Interview

shashank

"ಸಿಕ್ಸರ್" ಬಾರಿಸಿ "ಮೊಗ್ಗಿನ ಮನಸ್ಸಿ"ನ ಮೂಲಕ ಉತ್ತಮ ನಿರ್ದೇಶಕರು ಎಂಬ ಪಟ್ಟ ಗಿಟ್ಟಿಸಿಕೊಂಡವರು ನಮ್ಮ ನಿರ್ದೇಶಕ ಶಶಾಂಕ್ ರಾಜ್ ಅವರು. "ಮೊಗ್ಗಿನ ಮನಸ್ಸು" ಪ್ರೇಕ್ಷಕರನ್ನು ತನ್ನತ್ತ ಆಕರ್ಷಿಸಿತು. ಪ್ರೇಮಿಗಳಿಗೆ ಉತ್ತಮ ಸಂದೇಶ ನೀಡುವ ಮುಖಾಂತರ ಒಟ್ಟು ೫ ಪ್ರಶಸ್ತಿಗಳನ್ನ ತನ್ನ ಮಡಿಲಿಗೆ ಹಾಕಿಕೊಂಡಿತು. "ಮೊಗ್ಗಿನ ಮನಸ್ಸು" ಇಂದಿಗೂ ಎಲ್ಲರ ಹ್ರದಯದಲ್ಲಿ ಅಚ್ಚಳಿಯದೇ ಉಳಿದಿದೆ.
 
"ಕೃಷ್ಣನ ಲವ್ ಸ್ಟೋರಿ" ಇನ್ನೇನು ನಿಮ್ಮ ಮುಂದೇ ಬರುತ್ತದೆ. ಕೃಷ್ಣ ತನ್ನ ಲವ್ ಸ್ಟೋರಿಯನ್ನ ನಿಮ್ಮ ಮುಂದೆ ಹೇಳಲು ಇಷ್ಟರಲ್ಲೇ ಬರುವವನಿದ್ದಾನೆ [...]

Leave a Comment more...

ಸಂತೋಷ್ ಗೆ ನೂರು ಜನ್ಮ!

by on Feb.27, 2010, under Interview

Santosh-NooruJanmaku

“ನಾನು ಶ್ರಮ ಜೀವಿ. ಖಾಲಿ ಕುಳಿತುಕೊಳ್ಳುವುದು ನನಗೆ ಇಷ್ಟವಿಲ್ಲ. ಯಾವತ್ತೂ ಕೆಲಸ ಮಾಡುತ್ತಲೇ ಇರಬೇಕು. ನಾನು 18-19 ವಯಸ್ಸಿನಲ್ಲಿಯೇ ದುಡಿಯಲು ಪ್ರಾರಂಭಿಸಿದ್ದೇನೆ” ಎಂದು ಅರಳು ಹುರಿದಂತೆ ಪಟಪಟನೆ ಮಾತು ಮುಂದುವರೆಸುತ್ತಾರೆ ಸಂತೋಷ್. ‘ಕಲ್ಲರಳಿ ಹೂವಾಗಿ’, ‘ಮಾತಾಡ್ ಮಾತಾಡು ಮಲ್ಲಿಗೆ’, ‘ಚೆಲ್ಲಾಟ’, ‘ರಾಕಿ’, ‘ರಾವಣ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ ಸಂತೋಷ್, ಸದ್ಯ ‘ನೂರು ಜನ್ಮಕೂ’ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.
 
ಸ್ನಾತಕೋತ್ತರ ಪದವಿ ಮುಗಿಸಿದ ಸಂತೋಷ್ ಐಟಿ ಮಾರ್ಕೆಟಿ೦ಗ್ ಕೂಡ ಮಾಡಿದ್ದಾರೆ. ನಾಲ್ಕು ವರ್ಷಗಳ ಕಾಲ ಆಸ್ಟ್ರೇಲಿಯಾದಲ್ಲಿ ಕೆಲಸ [...]

Leave a Comment more...

ಸನಾತನಿಯ ಕುಟುಂಬ

by on Feb.12, 2010, under Interview

CrazyKutumba

ಪುರಾತನ ಕಾಲದಿಂದಲೂ ಬಂದವಳು ಈಕೆ. ಸನಾತನಿ ಎಂಬುದು ದೇವಿಯ ಹೆಸರು ಕೂಡ. ಯಾರಪ್ಪಾ ಈ ಸನಾತನಿ? ಪುರಾತನ ಕಾಲದಿಂದಲೂ ಬಂದಿದಾಳೆ ಅಂತಿದಾರೆ ಅಂತಾ ಅನಕೊಂಡರಾ. ಚಿಕ್ಕವಳಾದರೂ  ತಾಯಿ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಚಿತ್ರತಂಡದಿಂದ ಶಭಾಶ್ ಎನಿಸಿಕೊಂಡಿದ್ದಾರೆ. ಈಕೆ  ಬೇರೆ ಯಾರೂ ಅಲ್ಲ. ಕ್ರೇಜಿ ಕುಟುಂಬದಲ್ಲಿ ರಮೇಶ್ ಅರವಿಂದ್ ಅವರ ಹೆಂಡತಿಯಾಗಿ, ಒಂದು ಹೆಣ್ಣು ಮಗುವಿನ ತಾಯಿಯಾಗಿ ಅಭಿನಯಿಸಿದ್ದಾರೆ. ಅವರೇ ಸನಾತನಿ.
 
ಸನಾತನಿ ಎಂಬ ಹೆಸರು ಇವರ ತಾಯಿ ಪ್ರೀತಿಯಿಂದ ಇಟ್ಟ ಹೆಸರು. ಅಸಲಿಗೆ ಅವರ ಹೆಸರು [...]

Leave a Comment more...

‘ಮಿಸ್ ಇಂಡಿಯಾ’ಳ ಮಂದಹಾಸ

by on Feb.09, 2010, under Interview

Mandahasa_nikii

ಮುಂಬೈ ಹುಡುಗಿ ‘ಮಂದಹಾಸ’ ಬೀರಲು ಕನ್ನಡ ಚಿತ್ರರಂಗಕ್ಕೆ ಲಗ್ಗೆ ಇಟ್ಟಿದ್ದಾರೆ. ಇದು ನಿಕ್ಕಿಯವರ ಮೊದಲ ಚಿತ್ರ. ನಾಯಕಿ ನಿಕ್ಕಿ ಮಂಗಳೂರಿನವರಾದರೂ ಮುಂಬೈಯಲ್ಲೇ ಹುಟ್ಟಿ-ಬೆಳೆದು, ಅಲ್ಲೇ  ನೆಲೆಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿರುವ ನಿಕ್ಕಿ 2007 ರಲ್ಲಿ ಮಿಸ್ ಇಂಡಿಯಾ ಆಗಿ ಆಯ್ಕೆಯಾಗಿದ್ದರು. “ಚಿತ್ರ ತಂಡದಲ್ಲಿ ಅವರ ಹೊಂದಾಣಿಕೆ ತುಂಬಾ ಚೆನ್ನಾಗಿದೆ, ತುಂಬಾ ಕಾಮಿಡಿಯಾಗಿ ಮಾತನಾಡ್ತಾರೆ, ಎಲ್ಲರೊಂದಿಗೂ ಹೊಂದಿಕೊಂಡು ಹೋಗುತ್ತಾರೆ, ಅಭಿನಯವಂತೂ ಸೊಗಸಾಗಿದೆ” ಎನ್ನುತ್ತಾರೆ ಚಿತ್ರದ ಸಂಗೀತ ನಿರ್ದೇಶಕ ವೀರ್ ಸಮರ್ಥ ಅವರು.
 
ಅದೇ ರೀತಿಯಾಗಿ ‘ಜೋಶ್’ ಖ್ಯಾತಿಯ ರಾಕೇಶ್ ಮತ್ತೆ [...]

6 Comments more...

ಜಂಭದ ಹುಡುಗಿಯ ಬಿಂದಾಸ್ ಮಾತು

by on Feb.03, 2010, under Interview

Priya Hassan

ಯಾವುದೇ ಕ್ಷೇತ್ರದಲ್ಲಿರಬಹುದು ಇಂದು ಮಹಿಳಗೆ ಸಾಕಷ್ಟು ಸವಾಲುಗಳಿವೆ. ಒಬ್ಬ ಮಹಿಳೆ ಒಂದು ಕ್ಷೇತ್ರದಲ್ಲಿ ಮುಂದೆ ಬರಬೇಕೆಂದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಾಗೇನೆ ನಮ್ಮ ಸಿನಿಮಾ ರಂಗದಲ್ಲೂ ಕೂಡ ಮಹಿಳೆಯರಿಗೂ ಸಾಕಷ್ಟು ಸಮಸ್ಯೆಗಳು ಬರಬಹುದು. ಆದರೆ ಅವೆಲ್ಲವನ್ನು ಮೆಟ್ಟಿ ಮಹಿಳೆಯರಾದ ನಾವು ಮುಂದೆ ಬರಲು ಪ್ರಯತ್ನಿಸಬೇಕು. ಸಿನಿಮಾ ರಂಗದಲ್ಲಿ ಮಹಿಳಾ ನಿರ್ದೇಶಕಿಯರು ಇರೋದು ತುಂಬಾ ವಿರಳ. ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕಿಯರಿಗೆ ಇರುವ ಸವಾಲುಗಳ ಕುರಿತು ಪ್ರಿಯಾ ಹಾಸನ್ ಅವರ ಜೊತೆ ಮಾತನಾಡಿದಾಗ ಅವರು ನೀಡಿದಂಥ ಅಭಿಪ್ರಾಯಗಳು ಹೀಗಿದ್ದವು.
 
“ಜಂಭದ [...]

5 Comments more...

ಹಾಟ್ ಅಂಡ್ ಬಬ್ಲಿ – ಪ್ರಣೀತಾ

by on Jan.29, 2010, under Interview

Pranitha

‘ಪೊರ್ಕಿ’ ನಿಮ್ಮ ಮೊದಲ ಚಿತ್ರ. ಈ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯ?
ಈ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಅಂತಾ ಅನ್ಕೊಂಡಿದಿನಿ. ಫುಲ್ ಇಂಟ್ರಸ್ಟ್ ಕೊಟ್ಟು ಕಲಿತು ಅಭಿನಯ ಮಾಡಿದ್ದೀನಿ. ಚಿತ್ರ ಖಂಡಿತ ಯಶಸ್ಸು ತಂದು ಕೊಡುತ್ತದೆ ಅಂತಾ ಭರವಸೆ ಇಟ್ಟಿದಿನಿ.
 
‘ಪೊರ್ಕಿ’ ಇನ್ನೂ ರಿಲೀಸ್ ಆಗಿಲ್ಲ. ಅದಕ್ಕೂ ಮುಂಚೆ ನಿಮಗೆ ಇಷ್ಟೊಂದು ಪಬ್ಲಿಸಿಟಿ ಸಿಕ್ಕಿದೆ. ನಿಮಗೇನನ್ನಿಸುತ್ತೇ?
ರಿಯಲಿ ತುಂಬಾ ಖುಷಿ ಆಗಿದೆ, ಒಳ್ಳೆ ಮಾಕ್ರ್ಸ ಸಿಕ್ಕಿದೆ ಅಂತಾ. ದರ್ಶನ್ ಸಾರ್ ಇರೊದರಿಂದ ನನಗೆ ಇಷ್ಟೊಂದು ಪಬ್ಲಿಸಿಟಿ ಸಿಗಲು [...]

3 Comments more...

ಅಂತರಾತ್ಮ ವಿಕಾರ ಪ್ರೇತವಲ್ಲ…

by on Jan.27, 2010, under Interview, News

Antharatma

‘ಅಂತರಾತ್ಮ’ ಎನ್ನುವುದು ಪ್ರೇತಾತ್ಮದ ಕಥೆಯಾಗಿದ್ದು, ಕಾಲ್ಪನಿಕ ಚಿತ್ರವಾಗಿದೆ. ಯಾವುದೇ ಪುಸ್ತಕದಿಂದ ಆಯ್ದುಕೊಂಡ ಕಥೆ ಇದಲ್ಲ. ಬದಲಿಗೆ ಇಂಗ್ಲೀಷ್ ಚಿತ್ರವೊಂದಕ್ಕೆ ಪ್ರೇರೇಪಿತರಾಗಿ, ಬೆಂಗಳೂರಲ್ಲಿ ಆರು ತಿಂಗಳ ನಿರ್ದೇಶನದ ತರಬೇತಿ ಪಡೆದು ಮೊಟ್ಟಮೊದಲ ಬಾರಿಗೆ ‘ಅಂತರಾತ್ಮ’ ಎಂಬ ಕನ್ನಡ ಚಿತ್ರ ನಿರ್ದೇಶಿಸಿದ್ದಾರೆ ನಿರ್ದೇಶಕ ಶಂಕರ್ ಬಾಲಕೃಷ್ಣ.
 
ರೌಡೀಸಂ ಚಿತ್ರ, ಲವ್ ಸ್ಟೋರಿ, ಹಾಸ್ಯ ಚಿತ್ರ ಇಂಥ ಚಿತ್ರಗಳನ್ನು ಈಗಾಗಲೇ ಎಲ್ಲ ಚಿತ್ರ ನಿರ್ದೇಶಕರು ಮಾಡಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಇಂಥ ಚಿತ್ರ ನೋಡಿ ನೋಡಿ ಬೇಸತ್ತ ಪ್ರೇಕ್ಷಕರಿಗೆ ವಿಭಿನ್ನವಾಗಿರಲೆಂದು ಇಂಥ [...]

1 Comment more...

ಮಳೆ ಬಿಲ್ಲೆ – ಸುಖಧರೆಯವರೊಂದಿಗೆ ಕ್ಷಣಹೊತ್ತು ಮಾತುಕತೆ

by on Nov.25, 2009, under Interview

MALE_BILLE

"ಮಳೆ ಬಿಲ್ಲೆ,ಮಳೆ ಬಿಲ್ಲೆ" ಎಂಬ ಸುಂದರ ಹಾಡನ್ನು ಕನ್ನಡಿಗರು ಕೇಳದೇ ಇರಲು ಸಾಧ್ಯವಿಲ್ಲ. ಸೈನಿಕ ಸಿನಿಮಾದ ಈ ಹಾಡು ಅಷ್ಟೊಂದು ಪ್ರಸಿದ್ದಿ. ತಮ್ಮ ಸಿನಿಮಾದ ಈ  ಹಾಡಿನ ಸಾಲನ್ನೇ ಬಳಸಿಕೊಂಡು  ಮಹೇಶ್ ಸುಖಧರೆ  "ಮಳೆ ಬಿಲ್ಲೆ" ಸಿನಿಮಾವನ್ನು ನಿಧೆ೯ಶಿಸಿ, ನಿಮಿ೯ಸಿ ಬರುವ ವಾರ ತೆರೆಗೆ ತರುತ್ತಿದ್ದಾರೆ. ಸುಖಧರೆ ಪಿಲ್ಮ್ಸ್ ಬ್ಯಾನರಿನಲ್ಲಿಯೇ ಬರುತ್ತಿರುವ ಮಳೆ ಬಿಲ್ಲೆಗೆ ಅವರೀಗ ತಾವೇ ಸೈನಿಕ ರ‍ಾಗಿ ಹೋರ‍ಾಡುತ್ತಿದ್ದಾರೆ. ಅವರ ಬ್ಯುಸಿ ಸಮಯದಲ್ಲಿ  ಡಿಸೆ೦ಬರ್  ೪ ರ೦ದು ಬಿಡುಗಡೆ ಆಗುತ್ತಿರುವ ಮಳೆ ಬಿಲ್ಲೆ [...]

Leave a Comment more...

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...