Chitra Vaarte

News

ಗೆಲುವಿನ ಖುಷಿಯಲ್ಲಿ ಸಿದ್ಲಿಂಗು

by on Jan.20, 2012, under News

Sidalingu- (236)

ಸಿದ್ಲಿಂಗು ಸಕತ್ ಖುಷಿಯಲ್ಲಿದ್ದಾನೆ. ಕಾರಣ ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತಿರುವ ‘ಸಿದ್ಲಿಂಗು’ ವಾರಕ್ಕೂ ಮೊದಲೇ ಹತ್ತಿರ ಹತ್ತಿರ 1 ಕೋಟಿಗಳಿಕೆ ಮಾಡಿದ ಅಂದಾಜಿದೆ. ಬೆಂಗಳೂರಿನ ಮೇನ್ "ಥಿಯೇಟರ್’ ತ್ರಿವೇಣಿಯಲ್ಲಿ ಈಗಾಗಲೇ 8 ಲಕ್ಷ ಷೇರು ಪಡೆದು ಹಿಂದಿನ ವಾರದ ಎಲ್ಲಾ ಸಿನಿಮಾಗಳನ್ನು ಹಿಂದಿಕ್ಕಿ ಮುಂದಿದೆ. ಈ ಖುಷಿಯಲ್ಲಿ ಚಿತ್ರತಂಡ ಷೂಟಿಂಗ್ ಮುಗಿಸಿ ಕುಂಬಳಕಾಯಿ ಒಡೆಯಬೇಕಿದ್ದ ಚಿತ್ರತಂಡ ಮೊನ್ನೆ ಗೆಲುವಿನ ಖುಷಿಯಲ್ಲಿ ಮಾಧ್ಯಮದವರೊಂದಿಗೆ ಪೂಜೆ ಮತ್ತು ಕುಂಬಳಕಾಯಿ ಒಡೆದು ದಾಖಲೆ ನಿರ್ಮಿಸಿತು.
 
ಚಿತ್ರದ ಪ್ರಮುಖ ಹೈಲೈಟ್ ಯೋಗಿ ಮತ್ತು ರಮ್ಯಳ [...]

1 Comment more...

ಪರಭಾಷ ಸಿನಿಮಾಗಳ ಹಾವಳಿಗೆ ಸೆಡ್ಡು ಹೊಡೆದ `ಸಿದ್ಲಿಂಗು’ ಟೀಮ್

by on Jan.12, 2012, under News

Sidlingu-Yogesh

ಕನ್ನಡ ಚಿತ್ರರಂಗದವರು ಅಭಿಮಾನ ಶೂನ್ಯರಲ್ಲ. ನಮಗೂ ತಾಕತ್ತಿದೆ. ತೆಲುಗು-ತಮಿಳು ಚಿತ್ರರಂಗಕ್ಕೆ ಕಡಿಮೆಯಿಲ್ಲದಂತೆ ಚಿತ್ರಗಳನ್ನು ನೀಡುತ್ತ ಬಂದಿದ್ದೇವೆ. ನಮ್ಮ ಸಿನಿಮಾಗಳು 25 ರಿಂದ 30 ಕೋಟಿಯನ್ನು ನಮ್ಮ ನೆಲದಲ್ಲಿಯೇ ಗಳಿಕೆ ಮಾಡುತ್ತಿವೆ. ಪರಭಾಷ ಸಿನಿಮಾಗಳ ವ್ಯಾಮೋಹ ಬಿಟ್ಟು ಕನ್ನಡ ಚಿತ್ರಗಳನ್ನು ಗೆಲ್ಲಿಸಲು ಸಹಾಯ ಮಾಡಿ ಇನ್ನಷ್ಟು ಉತ್ತಮ ಸಿನಿಮಾಗಳನ್ನು ನಿರ್ಮಿಸಲು ಉತ್ತೇಜನ ನೀಡಿ ಎಂದು ಸಿದ್ಲಿಂಗು ಟೀಮ್ ಕನ್ನಡ ಚಿತ್ರೋದ್ಯಕ್ಕೆ  ಮನವರಿಕೆ ಮಾಡಿಕೊಡಲು ಮುಂದಾಗಿದೆ.
 
ಹೊಸ ವರ್ಷದ ಉತ್ಸಾಹದಲ್ಲಿ ಸಿದ್ಲಿಂಗು ಬಿಡುಗಡೆ ಮಾಡಲು ಹೊರಟ ಚಿತ್ರತಂಡಕ್ಕೆ ಹತ್ತಿರ 100 ಚಿತ್ರಮಂದಿರಗಳನ್ನು [...]

Leave a Comment more...

ಮಾಲಾಶ್ರೀ ಎಂದೆಂದಿಗೂ ಸ್ಯಾಂಡಲ್ವುಡ್ನ `ಶಕ್ತಿ’

by on Jan.06, 2012, under News

Malashri-Shatki

ನಂಜುಂಡಿ ಕಲ್ಯಾಣದಲ್ಲಿ ದೇವಿ ಯಾಗಿ,  ಪೋಲಿಸ್ ಪಾತ್ರದಲ್ಲಿ ಭಾರ್ಗವಿಯಾಗಿ ನಂತರ ತವರು ಮನೆ ಉಡುಗಡೆ ಸಿನಿಮಾದಲ್ಲಿ ಸಮಸ್ತ ಸ್ತ್ರೀ ಕುಲಕ್ಕೆ ಮಾದರಿ ಹೆಣ್ಣುಮಗಳಾಗಿ  ಮಾಲಾಶ್ರೀ ಬೆಳ್ಳಿತೆರೆಯಲ್ಲಿ ರಾಣಿ ಮಹರಾಣಿ ಯಾಗಿ ದಾಖಲೆ ನಿರ್ಮಿ ಸಿದವರು. ಮಾಲಾಶ್ರೀ ಸಿನಿಮಾವೆಂದರೆ ಮುಗಿಯಿತು ಸಮಸ್ತ ಕನ್ನಡ ಚಿತ್ರ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಸೇರಿ ಜಾತ್ರೆ ಯನ್ನೆ ನೆನಪಿಸುತ್ತಿದ್ದರು. ಈಗ ಮತ್ತೊಮ್ಮೆ ಮಾಲಾಶ್ರೀ ಕನ್ನಡ ಚಿತ್ರರಂಗದಲ್ಲಿ ಪ್ರಥಮ ಬಾರಿಗೆ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬರುತ್ತಿದ್ದು ಸ್ಟಾರ್ ನಟರಿಗೂ ಸಡ್ಡು ಹೊಡೆಯುತ್ತಿದ್ದಾರೆ.
 
ಮಾಲಾಶ್ರೀ ಕೇವಲ ತೆರೆಯಮೇಲೆ [...]

Leave a Comment more...

`ಸಿದ್ಲಿಂಗು’ ಬಿಡುಗಡೆ ಸಿದ್ದತೆಯಲ್ಲಿ ಸಿದ್ದರಾಜು.

by on Dec.29, 2011, under News

Sidlingu- (128)  Siddaraju (Producer)

ನೀವು ದುನಿಯಾ ಸಿನಿಮಾದ ನಂತರ ವಿಜಯ್,ಯೋಗೇಶ್ ಮತ್ತು ಸೂರಿಯನ್ನು ಸುಲಭವಾಗಿ ಗುರುತಿಸುತ್ತೀರಿ. ಈ ಮೂವರು ಮೇನ್ ಪಾರ್ಮಗೆ ಬರಲು ಹಗಲಿರುಳು ದುಡಿದ ನಿರ್ಮಾಪಕರು ಯಾರಿಗೂ ನೆನಪಿರುವುದಿಲ್ಲ. ರಾಜ್ ಕುಮಾರ್, ವಿಷ್ಣುವರ್ಧನ್ ಕಾಲದಿಂದಲೂ ಸಿನಿಮಾಕ್ಕೆ ಹಣ ಹೂಡುವವನನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಕಾರಣ ಚಿತ್ರರಂಗದ ಅಸ್ತಿತ್ವವೇ ನಿರ್ಮಾಪಕ. ಯಾರೂ ಸುಮ್ಮ ಸುಮ್ಮ ನೆ ಸಿನಿಮಾ ಮಾಡುವುದಿಲ್ಲ. ಉತ್ತಮ ಚಿತ್ರ ನಿರ್ಮಿಸಿ, ಜನರನ್ನು ಮೆಚ್ಚಿಸಿ, ಹಾಗೇ ಹಾಕಿದ ಬಂಡವಾಳಕ್ಕೆ ಲಾಭ ಪಡೆಯುವುದೇ  ನಿರ್ಮಾಪಕನ ನಿಜವಾದ  ಕನಸಾಗಿರುತ್ತದೆ.
 
ಈ ಎಲ್ಲ ಗುಣಗಳನ್ನು ಹೊಂದಿರುವ, [...]

Leave a Comment more...

ನಿಜವಾದ ಪ್ರೀತಿ ಪ್ರಾರಂಭವಾಗುವುದು ಒಂದೇ ಒಂದು ಸಾರಿ

by on Dec.17, 2011, under News

Onde Ondu Saari, producer and director

ನಿಜವಾದ ಪ್ರೀತಿ ಉಂಟಾಗುವುದು ಒಂದೇ ಸಾರಿ, ಅಂತಹ ಪ್ರೀತಿ ಎಂದೆಂದು ಶಾಶ್ವತ. ಅಂತಹ ಪ್ರೀತಿಯು ಒಮ್ಮೊಮ್ಮೆ ಅನುಮಾನ ಎಂಬ ರೋಗಕ್ಕೆ ಬಲಿಯಾಗಿ ಬಡವಾಗುವುದುಂಟು. ಪ್ರೀತಿಗೆ ಬೀಳದವರು ಯಾರಿಲ್ಲ ಹೇಳಿ, ಯುವಕ-ಯುವತಿಯರು, ಗಂಡ-ಹೆಂಡತಿಯರ ನಡುವಿನ ಜೀವನದ ಕೊಂಡಿಯೇ ಪ್ರೀತಿ. ಇಂತಹ ಪ್ರೀತಿಗೆ ಒಂದು ಮಿಸ್ ಕಾಲ್ ಇಲ್ಲವೇ ಮೆಸೆಜ್ ಸಂಸಾರವನ್ನೆ ಹಾಳು ಮಾಡಿಬಿಡುತ್ತದೆ. ಇವೆಲ್ಲ ಅಂಶಗಳನ್ನು ಒಳಗೊಂಡ ಸುಮುದುರ ಹಾಗೂ ರೋಮ್ಯಾಂಟಿಕ್ ಸಿನಿಮಾವೇ ‘ಒಂದೇ ಒಂದು ಸಾರಿ’.
 
ಶ್ರೀ ಮುತ್ತು ಪಿಲಂಸ್ ಬ್ಯಾನರಡಿಯಲ್ಲಿ ಪ್ರವೀಣ್ಕುಮಾರ್ ಕೊಂಚಾಡಿ ‘ಏಕಮೇವ’ ಸಿನಿಮಾ ನಿರ್ಮಿಸಿ [...]

Leave a Comment more...

ಪ್ರೇಕ್ಷಕರೆ ಮತ್ತೆ ಬನ್ನಿ ಚಿತ್ರಮಂದಿರಕ್ಕೆ

by on Dec.15, 2011, under News

Mathe Bane Preethsona

ಎಷ್ಟೋ ಚಿತ್ರಗಳು ಪ್ರೇಕ್ಷಕರ ಮನ್ನಣೆಗೆ ಪಾತ್ರವಾಗಿದ್ದರೂ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿರುವುದಿಲ್ಲ. ಹಾಗೇ ಒಂದಷ್ಟು ಚಿತ್ರಗಳು ಸುಮಾರಾಗಿದ್ದರೂ, ಕಲೆಕ್ಷನ್ ಫುಲ್ ಆಗಿರುತ್ತದೆ. ಮೊದಲಿನ ಕೆಟಗರಿಗೆ ಸೇರಿದ ಸಿನಿಮಾವೊಂದು ಈ ವಾರ ಮರು ಬಿಡುಗಡೆಯಾಗುತ್ತಿದೆ. ಬರಿ ಚಿತ್ರತಂಡಕ್ಕೆ ಅಷ್ಟೇ ಅಲ್ಲದೇ ಚಿತ್ರ ನೋಡಿದ ಪ್ರತಿಯೊಬ್ಬರಿಂದಲೂ ಭೇಷ್ ಎನಿಸಿಕೊಂಡಿತ್ತು. ಮೊದಲಿದ್ದ ಶೀರ್ಷಿಕೆ ಸಮೇತ ಚಿತ್ರದಲ್ಲೂ ಒಂದಷ್ಟು ಬದಲಾವಣೆ ಮಾಡಿಕೊಂಡಿದೆ ಚಿತ್ರತಂಡ. ಅದೇ ಮತ್ತೆ ಬನ್ನಿ ಪ್ರೀತ್ಸೋಣ. ಮೊದಲು ಆ್ಯಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ ಎಂದಿತ್ತು. ಆ್ಯಮ್ ಸಾರಿಯನ್ನು ಬದಿಗಿಟ್ಟು [...]

Leave a Comment more...

ಹಳ್ಳಿ ಹುಡುಗ-ಹುಡುಗಿಯರ ಪ್ರೇಮ್ ಕಹಾನಿ ಈ ‘ಶೈಲೂ’

by on Dec.08, 2011, under News

DSC_0576

ಬಹು ನಿರೀಕ್ಷಿತ ‘ಶೈಲೂ’ ಚಿತ್ರವು ಇಂದು ಬೆಳ್ಳಿಪರದೆಯ ಮೇಲೆ ರಾರಾಜಿಸಲಿದೆ. ಚೆಲುವಿನ ಚಿತ್ತಾರದ ನಂತರ ಎಸ್. ನಾರಾಯಣ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಿರ್ಮಾಪಕ ಕೆ. ಮಂಜು  ಪ್ರೀತಿಯ ಇನಿದನಿಯನ್ನು ಪ್ರೇಕ್ಷಕರಿಗೆ ಸಿದ್ದಪಡಿಸಿದ್ದಾರೆ.
 
ಶಿಸ್ತಿನ ಸಿಪಾಯಿ ನಿರ್ದೇಶಕ ಎಸ್. ನಾರಾಯಣ್ ‘ಶೈಲೂ’ ಚಿತ್ರವನ್ನು 10 ವರ್ಷಗಳ ಬಳಿಕ ‘ಜಮೀನ್ದಾರ’ ನಂತರ ಕೆ. ಮಂಜು ಅವರ ನಿರ್ಮಾಣದಲ್ಲಿ ನಿರ್ದೇಶಕರು ರಿಮೇಕ್ ಚಿತ್ರಕ್ಕೂ ಕನ್ನಡದ ಸೊಬಗು ಸೌಂದರ್ಯವನ್ನು ತಂದಿದ್ದಾರೆ. ‘ಶೈಲೂ’ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮಲಯಾಳಿ ಹುಡುಗಿ ಭಾಮಾ ಜೊತೆಗೆ [...]

Leave a Comment more...

ಸೆನ್ಸರ್ ನಿಂದ ಅಚ್ಚು ಮೆಚ್ಚು”ಗೆ, ಇಂದಿನಿಂದ ಪ್ರೇಕ್ಷಕರಿಗೆ

by on Nov.18, 2011, under News

Tarun-Archana

ಕಳೆದ ಡಿಸೆಂಬರ್ನಲ್ಲಿ ಮುಹೂರ್ತ ಕಂಡ ಅಚ್ಚು ಮೆಚ್ಚು ಸಿನಿಮಾ ಇಂದು ರಾಜ್ಯದಾದ್ಯಂತ 50 ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ತೆರೆಕಾಣುತ್ತಿದೆ. ವಿನಾಯಕ ಮೂವಿಮೇಕರ್ಸ್ ಲಾಂಛನದಲ್ಲಿ ಲೊಕೇಶ್ ಎಂ.ವಿ. ನಿರ್ಮಿಸುಸುತ್ತಿರುವ ಈ ಸಿನಿಮಾಕ್ಕೆ ಸ್ವತಃ ಅವರೇ ಕಥೆ-ಚಿತ್ರಕಥೆ ಒದಗಿಸಿದ್ದಾರೆ. ಹಿಂದೆ ವಿಧವೆಯರ ಬಗ್ಗೆ ಸಾಕಷ್ಟು ಕಥೆಗಳು ಬಂದರೂ, ಅಚ್ಚು ಮೆಚ್ಚು ವಿನಲ್ಲಿ ಡೇರಿಂಗ್ ಸಂಗತಿಗಳನ್ನು ತಿಳಿಸಲು ನಿರ್ದೇಶಕರು ಮತ್ತು ಕಥೆಗಾರರು ಯಶಸ್ವಿಯಾಗಿದ್ದಾರಂತೆ. ಸೆನ್ಸರ್ ಮಂಡಳಿಯಿಂದ ‘ಯು’ ನಿರ್ದೇ ಪಡೆದು ಉತ್ಸಾಹದಿಂದ ನಿರ್ಮಾಪಕರೆ ಸಿನಿಮಾವನ್ನು ಬಿಡುಗಡೆ ಮಾಡಿದ್ದಾರೆ.
 

ತರುಣ್ ಚಂದ್ರ ಹಿಂದೆ [...]

Leave a Comment more...

ಸುದೀಪ್ ಈಗ ವರದನಾಯಕ

by on Nov.09, 2011, under News

Varadhanayaka

ತಮಿಳಿನಿಂದ ಕರೆತಂದಿದ್ದ `ಸಿಂಗಂ’ ಇಲ್ಲಿ `ಕೆಂಪೇಗೌಡ’ನಾಗಿ ಮಿಂಚಿದ್ದು ಈಗ ಇತಿಹಾಸ. ಒಂದು ಚಿತ್ರ ಹಿಟ್ ಆದೊಡನೆ ಅದೇ ರೀತಿಯ ಸಬ್ಜೆಕ್ಟ್ ಆರಿಸಿಕೊಂಡು ಸಿನಿಮಾ ಮಾಡುವುದು ನಿರ್ಮಾಪಕರ ವಾಡಿಕೆ. ಹೀಗಾಗಿ `ಕೆಂಪೇಗೌಡ’ ನಿರ್ಮಿಸಿದ್ದ ಶಂಕರ್ಗೌಡ ಒಂದಷ್ಟು ಆ್ಯಕ್ಷನ್ ಪ್ಯಾಕ್ಡ್ ಸಿನಿಮಾಗಳನ್ನು ದಂಡಿಯಾಗಿ ಖರೀದಿ ಮಾಡಿಟ್ಟುಕೊಂಡಿದ್ದಾರೆ. ಅವೆಲ್ಲಾ ಚಿತ್ರಗಳಿಗೂ ಸುದೀಪನೇ ನಾಯಕ ಅನ್ನೋದು ಶಂಕರ್ ಮಾತು. ಇಷ್ಟಕ್ಕೂ ಸುದೀಪ್ ಇತ್ತೀಚೆಗೆ ಒಂದೆಡೆ ನಿಲ್ಲುತ್ತಿಲ್ಲ. ಒಂದು ವಾರ ಬಾಲಿವುಡ್, ಮತ್ತೊಂದು ವಾರ ಟಾಲಿವುಡ್… ಅದಾದ ನಂತರ ಸ್ಯಾಂಡಲ್ವುಡ್. ಹೀಗೆ ಒಂದು ತಿಂಗಳಲ್ಲಿ [...]

Leave a Comment more...

ಅಡ್ಡ ನಂದೇ ಅಂತಿದ್ದಾರೆ ಬೆಂಕೋಶ್ರೀ

by on Nov.09, 2011, under News

Aada-(201) B.K.Srinivas (Producer)

ಕೆಲ ದಿನಗಳಿಂದ `ಅಡ್ಡ’ ನಂದೇ ಬಾಸ್… ಯಾರೇನೇ ಅಂದರೂ `ಅಡ್ಡ’ಕ್ಕೆ ಅಧಿಪತಿ ನಾನೇ ಬ್ರದರ್… ಎಂದು ಕಂಡಕಂಡವರ ಕಿವಿಗೆ ಹೂವಿಡುತ್ತಿದ್ದ ನಿರ್ದೇಶಕ ಪ್ರೇಮ್ ಬಾಯಿ ಮುಚ್ಚಿಸಿದ್ದಾರೆ ನಿರ್ಮಾಪಕ ಕಮ್ ವಿತರಕ ಬೆಂಕೋಶ್ರೀ. ಬರೋಬ್ಬರಿ 14 ತಿಂಗಳಿನಿಂದ ಶೀರ್ಷಿಕೆಯನ್ನು ನವೀಕರಿಸದೇ ಬೇಜವಾಬ್ದಾರಿಯಿಂದ ಕಾಲ ಕಳೆದಿದ್ದ ಪ್ರೇಮ್ ಇದೀಗ `9 ವರ್ಷದಿಂದ ಇಟ್ಟುಕೊಂಡಿದ್ದ ಟೈಟಲ್ನ ಅದ್ಹೇಗೆ ಬೇರೆಯವರು ಇಟ್ಟುಕೊಳ್ಳೇಕೆ ಸಾಧ್ಯ…? ಏನೇ ಆದ್ರೂ `ಅಡ್ಡ ‘ ನಂದೇ…’ ಎಂದು ಬಡಬಡಿಸುತ್ತಿದ್ದಾರೆ.
 
ಆದರೆ ಸಾ.ರಾ.ಗೋವಿಂದು ಬಳಿ ಕಾನೂನುಬದ್ಧವಾಗಿ ಶೀರ್ಷಿಕೆ ಪಡೆದು ಹರ್ಷ [...]

Leave a Comment more...

Looking for something?

Use the form below to search the site:

Still not finding what you're looking for? Drop a comment on a post or contact us so we can take care of it!

Archives

All entries, chronologically...