News
ಬಾಲಿವುಡ್ ರೇಂಜಿನಲ್ಲಿ ಆಡಿಯೋ ಬಿಡುಗಡೆ ಮಾಡಿಕೊಂಡ ಅಲೆಮಾರಿ
by admin on Feb.09, 2012, under News

`ಅಲೆಮಾರಿ’ ಮುಹೂರ್ತದಿಂದಲೂ ದೊಡ್ಡ ಸುದ್ಧಿಯನ್ನು ಮಾಡುತ್ತಿದೆ. ಹಾಗೇ ಆಡಿಯೋ ಬಿಡುಗಡೆ ಸಮಾರಂಬವನ್ನು ಅಷ್ಟೇ ಅಧ್ದೂರಿಯಾಗಿ ಹಮ್ಮಿಕೊಂಡು ಕನ್ನಡ ಚಿತ್ರರಂಗಕ್ಕೆ ಮಾದರಿ ಎನಿಸಿತು. ಇದಕ್ಕೆಲ್ಲ ಕಾರಣ ಬೆಂಕೋಶ್ರೀ ಎಂದೆ ಖ್ಯಾತರಾದ ಬಿ.ಕೆ.ಶ್ರೀನಿವಾಸ್ರವರು. ಕಳೆದ ವರ್ಷ ಜೋಗಯ್ಯ ಸಿನಿಮಾದ ಮೂಲಕ ಹೊಸ ದಾಖಲೆಗಳನ್ನು ಸೃಷ್ಟಿಸಿದ ಇವರು ಪ್ರತಿಹಂತದಲ್ಲೂ ಹೊಸತನದ ಮೂಲಕ ಗಾಂಧಿನಗರದಲ್ಲಿ ಸಂಚಲನ ಮೂಡಿಸುತ್ತಾರೆ.
ಅಂದು ಸಮಾರಂಭಕ್ಕೆ ಮುಖ್ಯ ಅತಿಥಿಗಳು ದಿನನಿತ್ಯ ನಮಗೆ ಸಂಗೀತದ ರಸದೌತಣವನ್ನು ನೀಡುವ ಖ್ಯಾತ ನಿರ್ದೇಶಕರು.. ಸಾವಿರಾರು ಜನರ ಮಧ್ಯೆ `ಅಲೆಮಾರಿ’ಯ ಹಾಡುಗಳು ಅರಮನೆ ಮೈದಾನದಲ್ಲಿ ಲೋಕಾರ್ಪನೆಗೊಂಡವು. [...]
ಕೋಟಿ ಕೋಟಿ ರೂಪಾಯಿಯ ‘ಎಕೆ 56′
by admin on Feb.09, 2012, under News

ಇದೇ ಹತ್ತನೇ ತಾರೀಖು ಓಂ ಪ್ರಕಾಶರವರ ನಿರ್ದೇಶನದ ‘ಎಕೆ 56′ ಬಿಡುಗಡೆಯಾಗುತ್ತಿದೆ. ಸಿದ್ಧಾಂತ್ ಹಾಗೂ ಶಿರಿನ್ ನಾಯಕ ನಾಯಕಿ. ದಶಕದ ಹಿಂದೆ ಬಂದ ಎಕೆ 47ಗೂ ಇವತ್ತಿನ ಎಕೆ 56ಗೂ ಏನು ವ್ಯತ್ಯಾಸ?
‘ಇದೇ ಬೇರೆ. ಅದೇ ಬೇರೆ. ಹೆಸರು ಮಾತ್ರ ಕೊಂಚ ಅದಕ್ಕೆ ಹೋಲುವಂತಿದೆ ಬಿಟ್ಟರೆ, ಮಿಕ್ಕಂತೆ ಎಕೆ 56 ಬೇರೆಯದೇ ಆದ ಸಿನಿಮಾ’ ಎನ್ನುತ್ತಾರೆ ಓಂಪ್ರಕಾಶ್. ಹೆಸರಷ್ಟೇ ಅಲ್ಲ, ತೊಡಗಿಸಿರುವ ಬಂಡವಾಳವೂ ಅವತ್ತಿನ 47ನ್ನ ಹಿಂದಕ್ಕೆ ದಬ್ಬಿದೆ ಅನ್ನೋದು ಬಲ್ಲವರ ಮಾತು. ರಾಮು ಎಕೆ 47 [...]
ಬಾಕ್ಸ್ ಆಫೀಸ್ ಲೂಟಿ ಹೊಡೆಯುತ್ತಿದ್ದಾನೆ ಚಿಂಗಾರಿ
by admin on Feb.09, 2012, under News

ಕಳೆದ ವಾರ ಬಿಡುಗಡೆಯಾದ ದರ್ಶನ್ ಅಭಿನಯದ ಚಿಂಗಾರಿ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಾರಥಿ ಚಿತ್ರ ಶತಕ ಬಾರಿಸಿದ ನಂತರ ಬಹು ನಿರೀಕ್ಷಿತ ಚಿತ್ರ ಎನಿಸಿಕೊಂಡಿದ್ದ ಚಿಂಗಾರಿ ಪ್ರೇಕ್ಷಕನಿಗೆ ಥ್ರಿಲ್ ನೀಡುತ್ತ ಗೆಲುವಿನ ಪಯಣ ಮುಂದುವರೆದಿದೆ.
ಈವರೆಗೂ ಕಾಣಿಸಿಕೊಳ್ಳದಂತಹ ಪಾತ್ರ ನಿರ್ವಹಿಸಿರುವ ದರ್ಶನ್ಗೆ ಸಿನಿಮಾ ಬಿಡುಗಡೆಯಾಗುವ ಮೊದಲು ಕೊಂಚ ಅಂಜಿಕೆಯಿತ್ತಂತೆ. ಆದರೆ ಚಿತ್ರ ಬಿಡುಗಡೆಯಾಗಿ ಅದ್ಭುತ ಓಪನಿಂಗ್ ಪಡೆಯುವಲ್ಲಿ ಯಶಸ್ವಿಯಾದ್ದರಿಂದ ಇಡಿ ಚಿತ್ರತಂಡ ನಿರಾಳವಾಗಿದೆ. ಈ ಹಿಂದೆ ಗೆಳೆಯ, ಬಿರುಗಾಳಿ ಚಿತ್ರಗಳನ್ನು ನಿರ್ದೇಶಿಸಿದ್ದ ಹರ್ಷ ಕಳೆದೆರಡು ಚಿತ್ರಗಳಿಂದ [...]
ಗೆಲುವಿನ ಖುಷಿಯಲ್ಲಿ ಸಿದ್ಲಿಂಗು
by admin on Jan.20, 2012, under News

ಸಿದ್ಲಿಂಗು ಸಕತ್ ಖುಷಿಯಲ್ಲಿದ್ದಾನೆ. ಕಾರಣ ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತಿರುವ ‘ಸಿದ್ಲಿಂಗು’ ವಾರಕ್ಕೂ ಮೊದಲೇ ಹತ್ತಿರ ಹತ್ತಿರ 1 ಕೋಟಿಗಳಿಕೆ ಮಾಡಿದ ಅಂದಾಜಿದೆ. ಬೆಂಗಳೂರಿನ ಮೇನ್ "ಥಿಯೇಟರ್’ ತ್ರಿವೇಣಿಯಲ್ಲಿ ಈಗಾಗಲೇ 8 ಲಕ್ಷ ಷೇರು ಪಡೆದು ಹಿಂದಿನ ವಾರದ ಎಲ್ಲಾ ಸಿನಿಮಾಗಳನ್ನು ಹಿಂದಿಕ್ಕಿ ಮುಂದಿದೆ. ಈ ಖುಷಿಯಲ್ಲಿ ಚಿತ್ರತಂಡ ಷೂಟಿಂಗ್ ಮುಗಿಸಿ ಕುಂಬಳಕಾಯಿ ಒಡೆಯಬೇಕಿದ್ದ ಚಿತ್ರತಂಡ ಮೊನ್ನೆ ಗೆಲುವಿನ ಖುಷಿಯಲ್ಲಿ ಮಾಧ್ಯಮದವರೊಂದಿಗೆ ಪೂಜೆ ಮತ್ತು ಕುಂಬಳಕಾಯಿ ಒಡೆದು ದಾಖಲೆ ನಿರ್ಮಿಸಿತು.
ಚಿತ್ರದ ಪ್ರಮುಖ ಹೈಲೈಟ್ ಯೋಗಿ ಮತ್ತು ರಮ್ಯಳ [...]
ಪರಭಾಷ ಸಿನಿಮಾಗಳ ಹಾವಳಿಗೆ ಸೆಡ್ಡು ಹೊಡೆದ `ಸಿದ್ಲಿಂಗು’ ಟೀಮ್
by admin on Jan.12, 2012, under News

ಕನ್ನಡ ಚಿತ್ರರಂಗದವರು ಅಭಿಮಾನ ಶೂನ್ಯರಲ್ಲ. ನಮಗೂ ತಾಕತ್ತಿದೆ. ತೆಲುಗು-ತಮಿಳು ಚಿತ್ರರಂಗಕ್ಕೆ ಕಡಿಮೆಯಿಲ್ಲದಂತೆ ಚಿತ್ರಗಳನ್ನು ನೀಡುತ್ತ ಬಂದಿದ್ದೇವೆ. ನಮ್ಮ ಸಿನಿಮಾಗಳು 25 ರಿಂದ 30 ಕೋಟಿಯನ್ನು ನಮ್ಮ ನೆಲದಲ್ಲಿಯೇ ಗಳಿಕೆ ಮಾಡುತ್ತಿವೆ. ಪರಭಾಷ ಸಿನಿಮಾಗಳ ವ್ಯಾಮೋಹ ಬಿಟ್ಟು ಕನ್ನಡ ಚಿತ್ರಗಳನ್ನು ಗೆಲ್ಲಿಸಲು ಸಹಾಯ ಮಾಡಿ ಇನ್ನಷ್ಟು ಉತ್ತಮ ಸಿನಿಮಾಗಳನ್ನು ನಿರ್ಮಿಸಲು ಉತ್ತೇಜನ ನೀಡಿ ಎಂದು ಸಿದ್ಲಿಂಗು ಟೀಮ್ ಕನ್ನಡ ಚಿತ್ರೋದ್ಯಕ್ಕೆ ಮನವರಿಕೆ ಮಾಡಿಕೊಡಲು ಮುಂದಾಗಿದೆ.
ಹೊಸ ವರ್ಷದ ಉತ್ಸಾಹದಲ್ಲಿ ಸಿದ್ಲಿಂಗು ಬಿಡುಗಡೆ ಮಾಡಲು ಹೊರಟ ಚಿತ್ರತಂಡಕ್ಕೆ ಹತ್ತಿರ 100 ಚಿತ್ರಮಂದಿರಗಳನ್ನು [...]
ಮಾಲಾಶ್ರೀ ಎಂದೆಂದಿಗೂ ಸ್ಯಾಂಡಲ್ವುಡ್ನ `ಶಕ್ತಿ’
by admin on Jan.06, 2012, under News
ನಂಜುಂಡಿ ಕಲ್ಯಾಣದಲ್ಲಿ ದೇವಿ ಯಾಗಿ, ಪೋಲಿಸ್ ಪಾತ್ರದಲ್ಲಿ ಭಾರ್ಗವಿಯಾಗಿ ನಂತರ ತವರು ಮನೆ ಉಡುಗಡೆ ಸಿನಿಮಾದಲ್ಲಿ ಸಮಸ್ತ ಸ್ತ್ರೀ ಕುಲಕ್ಕೆ ಮಾದರಿ ಹೆಣ್ಣುಮಗಳಾಗಿ ಮಾಲಾಶ್ರೀ ಬೆಳ್ಳಿತೆರೆಯಲ್ಲಿ ರಾಣಿ ಮಹರಾಣಿ ಯಾಗಿ ದಾಖಲೆ ನಿರ್ಮಿ ಸಿದವರು. ಮಾಲಾಶ್ರೀ ಸಿನಿಮಾವೆಂದರೆ ಮುಗಿಯಿತು ಸಮಸ್ತ ಕನ್ನಡ ಚಿತ್ರ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಸೇರಿ ಜಾತ್ರೆ ಯನ್ನೆ ನೆನಪಿಸುತ್ತಿದ್ದರು. ಈಗ ಮತ್ತೊಮ್ಮೆ ಮಾಲಾಶ್ರೀ ಕನ್ನಡ ಚಿತ್ರರಂಗದಲ್ಲಿ ಪ್ರಥಮ ಬಾರಿಗೆ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬರುತ್ತಿದ್ದು ಸ್ಟಾರ್ ನಟರಿಗೂ ಸಡ್ಡು ಹೊಡೆಯುತ್ತಿದ್ದಾರೆ.
ಮಾಲಾಶ್ರೀ ಕೇವಲ ತೆರೆಯಮೇಲೆ [...]
`ಸಿದ್ಲಿಂಗು’ ಬಿಡುಗಡೆ ಸಿದ್ದತೆಯಲ್ಲಿ ಸಿದ್ದರಾಜು.
by admin on Dec.29, 2011, under News

ನೀವು ದುನಿಯಾ ಸಿನಿಮಾದ ನಂತರ ವಿಜಯ್,ಯೋಗೇಶ್ ಮತ್ತು ಸೂರಿಯನ್ನು ಸುಲಭವಾಗಿ ಗುರುತಿಸುತ್ತೀರಿ. ಈ ಮೂವರು ಮೇನ್ ಪಾರ್ಮಗೆ ಬರಲು ಹಗಲಿರುಳು ದುಡಿದ ನಿರ್ಮಾಪಕರು ಯಾರಿಗೂ ನೆನಪಿರುವುದಿಲ್ಲ. ರಾಜ್ ಕುಮಾರ್, ವಿಷ್ಣುವರ್ಧನ್ ಕಾಲದಿಂದಲೂ ಸಿನಿಮಾಕ್ಕೆ ಹಣ ಹೂಡುವವನನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಕಾರಣ ಚಿತ್ರರಂಗದ ಅಸ್ತಿತ್ವವೇ ನಿರ್ಮಾಪಕ. ಯಾರೂ ಸುಮ್ಮ ಸುಮ್ಮ ನೆ ಸಿನಿಮಾ ಮಾಡುವುದಿಲ್ಲ. ಉತ್ತಮ ಚಿತ್ರ ನಿರ್ಮಿಸಿ, ಜನರನ್ನು ಮೆಚ್ಚಿಸಿ, ಹಾಗೇ ಹಾಕಿದ ಬಂಡವಾಳಕ್ಕೆ ಲಾಭ ಪಡೆಯುವುದೇ ನಿರ್ಮಾಪಕನ ನಿಜವಾದ ಕನಸಾಗಿರುತ್ತದೆ.
ಈ ಎಲ್ಲ ಗುಣಗಳನ್ನು ಹೊಂದಿರುವ, [...]
ನಿಜವಾದ ಪ್ರೀತಿ ಪ್ರಾರಂಭವಾಗುವುದು ಒಂದೇ ಒಂದು ಸಾರಿ
by admin on Dec.17, 2011, under News
ನಿಜವಾದ ಪ್ರೀತಿ ಉಂಟಾಗುವುದು ಒಂದೇ ಸಾರಿ, ಅಂತಹ ಪ್ರೀತಿ ಎಂದೆಂದು ಶಾಶ್ವತ. ಅಂತಹ ಪ್ರೀತಿಯು ಒಮ್ಮೊಮ್ಮೆ ಅನುಮಾನ ಎಂಬ ರೋಗಕ್ಕೆ ಬಲಿಯಾಗಿ ಬಡವಾಗುವುದುಂಟು. ಪ್ರೀತಿಗೆ ಬೀಳದವರು ಯಾರಿಲ್ಲ ಹೇಳಿ, ಯುವಕ-ಯುವತಿಯರು, ಗಂಡ-ಹೆಂಡತಿಯರ ನಡುವಿನ ಜೀವನದ ಕೊಂಡಿಯೇ ಪ್ರೀತಿ. ಇಂತಹ ಪ್ರೀತಿಗೆ ಒಂದು ಮಿಸ್ ಕಾಲ್ ಇಲ್ಲವೇ ಮೆಸೆಜ್ ಸಂಸಾರವನ್ನೆ ಹಾಳು ಮಾಡಿಬಿಡುತ್ತದೆ. ಇವೆಲ್ಲ ಅಂಶಗಳನ್ನು ಒಳಗೊಂಡ ಸುಮುದುರ ಹಾಗೂ ರೋಮ್ಯಾಂಟಿಕ್ ಸಿನಿಮಾವೇ ‘ಒಂದೇ ಒಂದು ಸಾರಿ’.
ಶ್ರೀ ಮುತ್ತು ಪಿಲಂಸ್ ಬ್ಯಾನರಡಿಯಲ್ಲಿ ಪ್ರವೀಣ್ಕುಮಾರ್ ಕೊಂಚಾಡಿ ‘ಏಕಮೇವ’ ಸಿನಿಮಾ ನಿರ್ಮಿಸಿ [...]
ಪ್ರೇಕ್ಷಕರೆ ಮತ್ತೆ ಬನ್ನಿ ಚಿತ್ರಮಂದಿರಕ್ಕೆ
by admin on Dec.15, 2011, under News

ಎಷ್ಟೋ ಚಿತ್ರಗಳು ಪ್ರೇಕ್ಷಕರ ಮನ್ನಣೆಗೆ ಪಾತ್ರವಾಗಿದ್ದರೂ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿರುವುದಿಲ್ಲ. ಹಾಗೇ ಒಂದಷ್ಟು ಚಿತ್ರಗಳು ಸುಮಾರಾಗಿದ್ದರೂ, ಕಲೆಕ್ಷನ್ ಫುಲ್ ಆಗಿರುತ್ತದೆ. ಮೊದಲಿನ ಕೆಟಗರಿಗೆ ಸೇರಿದ ಸಿನಿಮಾವೊಂದು ಈ ವಾರ ಮರು ಬಿಡುಗಡೆಯಾಗುತ್ತಿದೆ. ಬರಿ ಚಿತ್ರತಂಡಕ್ಕೆ ಅಷ್ಟೇ ಅಲ್ಲದೇ ಚಿತ್ರ ನೋಡಿದ ಪ್ರತಿಯೊಬ್ಬರಿಂದಲೂ ಭೇಷ್ ಎನಿಸಿಕೊಂಡಿತ್ತು. ಮೊದಲಿದ್ದ ಶೀರ್ಷಿಕೆ ಸಮೇತ ಚಿತ್ರದಲ್ಲೂ ಒಂದಷ್ಟು ಬದಲಾವಣೆ ಮಾಡಿಕೊಂಡಿದೆ ಚಿತ್ರತಂಡ. ಅದೇ ಮತ್ತೆ ಬನ್ನಿ ಪ್ರೀತ್ಸೋಣ. ಮೊದಲು ಆ್ಯಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ ಎಂದಿತ್ತು. ಆ್ಯಮ್ ಸಾರಿಯನ್ನು ಬದಿಗಿಟ್ಟು [...]
ಹಳ್ಳಿ ಹುಡುಗ-ಹುಡುಗಿಯರ ಪ್ರೇಮ್ ಕಹಾನಿ ಈ ‘ಶೈಲೂ’
by admin on Dec.08, 2011, under News

ಬಹು ನಿರೀಕ್ಷಿತ ‘ಶೈಲೂ’ ಚಿತ್ರವು ಇಂದು ಬೆಳ್ಳಿಪರದೆಯ ಮೇಲೆ ರಾರಾಜಿಸಲಿದೆ. ಚೆಲುವಿನ ಚಿತ್ತಾರದ ನಂತರ ಎಸ್. ನಾರಾಯಣ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಿರ್ಮಾಪಕ ಕೆ. ಮಂಜು ಪ್ರೀತಿಯ ಇನಿದನಿಯನ್ನು ಪ್ರೇಕ್ಷಕರಿಗೆ ಸಿದ್ದಪಡಿಸಿದ್ದಾರೆ.
ಶಿಸ್ತಿನ ಸಿಪಾಯಿ ನಿರ್ದೇಶಕ ಎಸ್. ನಾರಾಯಣ್ ‘ಶೈಲೂ’ ಚಿತ್ರವನ್ನು 10 ವರ್ಷಗಳ ಬಳಿಕ ‘ಜಮೀನ್ದಾರ’ ನಂತರ ಕೆ. ಮಂಜು ಅವರ ನಿರ್ಮಾಣದಲ್ಲಿ ನಿರ್ದೇಶಕರು ರಿಮೇಕ್ ಚಿತ್ರಕ್ಕೂ ಕನ್ನಡದ ಸೊಬಗು ಸೌಂದರ್ಯವನ್ನು ತಂದಿದ್ದಾರೆ. ‘ಶೈಲೂ’ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮಲಯಾಳಿ ಹುಡುಗಿ ಭಾಮಾ ಜೊತೆಗೆ [...]

