ಗಾನಬಜಾನ ಚಿತ್ರತಂಡದ ಯಾತ್ರೆ
published on Jul.24, 2010, under News
ಈಗಾಗಲೇ ರಾಧಿಕಾ ಪಂಡಿತ್ ಅಭಿನಯಿಸಿದ ಕೃಷ್ಣನ ಲವ್ ಸ್ಟೋರಿ 50 ನೇ ದಿನದತ್ತ ಮುನ್ನುಗ್ಗುತ್ತಿದೆ. ಆಗಲೇ ಗಾನ ಬಜಾನಾ ಕೂಡ ಭಜನೆಯನ್ನು ಶುರು ಮಾಡಿಕೊಂಡಿದೆ. ಇತ್ತೀಚೆಗೆ ಪ್ರೇಕ್ಷಕರ ಜೊತೆಗೆ ಪಿಕನಿಕ್ ಎಂಬ ಕಾರ್ಯಕ್ರಮನ್ನು ಆಯೋಜಿಸಲು ಈ ಟೀಮ್ ಯೋಜನೆಯನ್ನು ಹಮ್ಮಿಕೊಂಡಿತು. ಹಾಗೇ ಪ್ರೇಕ್ಷಕರು ನಿರೀಕ್ಷೆಗೂ ಮೀರಿ ಗಾನಾ ಬಜಾನ ಟೀಮಿನೋಮದಿಗೆ ಪಿಕನಿಕ್ ಹೋಗಲು ಸಿದ್ದವಾದರು. ಅವರಲ್ಲಿ ಕೆಲವರನ್ನು ಕರೆದುಕೊಂಡು ಜೇಡ್ ಗಾರ್ಡನ್ ನತ್ತ ಹೊರಟಿತು. ದಾರಿಯುದ್ದಕ್ಕೂ ಈ ಟೀಮು ಹರಟೆ, ಸಂತಸದೊಂದಿಗೆ ಕೆಲವು ಕ್ಷಣ ಕಳೆದರು.
ಈ ತಂಡದಲ್ಲಿ ರಾಧಿಕಾ ಪಂಡಿತ್ ಮುಖ್ಯ ಹೈಲೈಟ್ ಆಗಿದಲ್ಲದೇ, ತರುಣ ಈ ಸಭೆಗೆ ಮತ್ತೊಂದು ಮೆರುಗು. ನಿದೇ೯ಶಕ ಪ್ರಶಾಂತ ನಿಮಾ೯ಪಕ ನವೀನ್ ಈ ಇಬ್ಬರ ಸಹೋದರರ ಜೋಡಿಯೊಂದಿಗೆ ಸಂಗೀತ ಜೋಶ್ವ ಶ್ರೀಧರ್ ಸಂಗಮದಲ್ಲಿ ಮಾತಿನ ಜೊತೆಗೆ ಸಂಗೀತ ಕಚೇರಿ ಸಹ ನಡೆಯಿತು.ಅಲ್ಲದೇ ನೆರೆದಿದ್ದ ಪೇಕ್ಷಕರು ತಮ್ಮ ನೆಚ್ಚಿನ ನಟನಟಿಯರ ಜೊತೆ ಮಾತಿನ ಸುರಿಮಳೆಯನ್ನೆ ಗೈದರು. ಈ ನಡುವೆಯೇ ಕಿರಣ ಮತ್ತು ಭರತರವರ ಹಾಡುಕುಣಿತವು ಜೋರಾಗಿತ್ತು. ಒಟ್ಟಿನಲ್ಲಿ ಈ ಕಾರ್ಯಕ್ರಮದ ಮೂಲಕ ಜನರೊಂದಿಗೆ ಬೆರೆತು ಆ ದಿನದ ಬಜಾನ ನಡೆದಿದ್ದೆ ದೊಡ್ಡ ಹೈಲೈಟ್.

